Saturday, November 12, 2016

ರಾಧೆಯ ಸ್ವಗತ
ಅದೇ ಯಮುನೆ‌ ಅದೇ ಕೊಳಲು
ಇಂದು ಮೌನ ತಳೆದಿವೆ.
ಮನದ ನೋವು,ಬಯಕೆ ಕಾವು
ಹೃದಯ ಅವನ ‌ಕಾದಿದೆ.

ತುಳಸೀ ಮಾಲೆ - ಗೋವು ಶಾಲೆ
ಕನ್ನನಿರದೆ ಸೊರಗಿದೆ
ಮಧುರ ಗೀತ - ರಾಸ ಕುಣಿತ
ಎಲ್ಲ‌‌ ಸ್ಥಬ್ದವಾಗಿದೆ

ಬಂದೇ ಬರುವೆನೆಂದ ವಚನ
ಮನದಿ ನಿತ್ಯ ಧ್ವನಿಸಿದೆ
"ನಾನೇ ನೀನು , ನಿನ್ನಲಿರುವೆ"
ಬರಿಯ ನೆನಪು ಉಳಿಯಿತೇ!?
~~~~~~~
ಸಂಧ್ಯಾ ಕಾನತ್ತೂರು.

No comments:

Post a Comment