ಸಾಧನೆಗಿಂದು ಸೂರ್ಯನೇ ಸ್ಫೂರ್ತಿ
ಆಗಸದೆತ್ತರ ಬೆಳೆಯಲಿ ಕೀರ್ತಿ
ಸಮೃದ್ಧಿಯ ಸಂಕೇತ ಈ ಸಂಕ್ರಾಂತಿ
ನೀಡಲಿ ಜಗಕೆ ಸುಖ ಶಾಂತಿ
ಪ್ರಭೆಯನು ಬೀರುತ
ಹೊರಟಿಹ ಸೂರ್ಯ ; ಉತ್ತರದೆಡೆಗೆ --
ಹಾರೈಸುವೆ ಸತತ
ಸುಖ ಸಂತೋಷವ ನಿಮಗೆ--
ನಿಲ್ಲಲಿ ದ್ವೇಷ ಅಸೂಯೇಯಾಕ್ರಮಣ
ನಡೆಯಲಿ ಸ್ನೇಹ ಸುಧಾಲಿಂಗನ ....
ಸಾಧನೆ ಎಂಬುದು ಮುಗಿಯದ ಪಯಣ
ಶುಭವನ್ನು ತರಲಿ ಮಕರ ಸಂಕ್ರಮಣ .
Friday, January 13, 2012
Monday, January 9, 2012
ಊರ್ಮಿಳೆಯ ಮೂಕ ಗೀತೆ
ಹಳದಿ ಹೂವ ಮರವೇ ಹೇಳು
ಎಂದು ಬರುವ ಲಕ್ಷ್ಮಣ ?
ಹತ್ತರೊಡನೆ ನಾಲ್ಕು ಚೈತ್ರ
ಯುಗವು ಒಂದು ಪ್ರತಿ ಕ್ಷಣ!
ಪರ್ಣಕುಟಿಯ ಕದವ ತಟ್ಟಿ
ಬರುವನೆಂದು ನನ್ನವ?
ಹೇಳು ಸರಯೂ ತಾಳಲಾರೆ
ಇನಿಯನಿರದೆ ವಿರಹವ....
ಅಡವಿಯಲ್ಲಿ ಯಾವ ಮಾಯೆ
ನಲ್ಲ ನಿನ್ನ ಸೆಳೆಯಿತೋ!
ಎಲ್ಲಿ ಮಾರಿ ಕಣ್ಣು ತಗುಲಿ
ನಿನ್ನ ದೇಹ ಸೊರಗಿತೋ......
ಬಲ್ಲೆ ನಾನು ಬರುವನವನು
ಹೃದಯ ಅವನ ಕಾದಿದೆ
ಮುತ್ತನೆಲ್ಲ ಏಣಿಸುತಿರುವೆ
ಕೆನ್ನೆ ಇನ್ನೂ ಹಸಿಯಿದೆ .....
ಎಂದು ಬರುವ ಲಕ್ಷ್ಮಣ ?
ಹತ್ತರೊಡನೆ ನಾಲ್ಕು ಚೈತ್ರ
ಯುಗವು ಒಂದು ಪ್ರತಿ ಕ್ಷಣ!
ಪರ್ಣಕುಟಿಯ ಕದವ ತಟ್ಟಿ
ಬರುವನೆಂದು ನನ್ನವ?
ಹೇಳು ಸರಯೂ ತಾಳಲಾರೆ
ಇನಿಯನಿರದೆ ವಿರಹವ....
ಅಡವಿಯಲ್ಲಿ ಯಾವ ಮಾಯೆ
ನಲ್ಲ ನಿನ್ನ ಸೆಳೆಯಿತೋ!
ಎಲ್ಲಿ ಮಾರಿ ಕಣ್ಣು ತಗುಲಿ
ನಿನ್ನ ದೇಹ ಸೊರಗಿತೋ......
ಬಲ್ಲೆ ನಾನು ಬರುವನವನು
ಹೃದಯ ಅವನ ಕಾದಿದೆ
ಮುತ್ತನೆಲ್ಲ ಏಣಿಸುತಿರುವೆ
ಕೆನ್ನೆ ಇನ್ನೂ ಹಸಿಯಿದೆ .....
Subscribe to:
Posts (Atom)